“ಕರುಣೆ ಇಲ್ಲದ ಕಟುಕರು”
ದೃಶ್ಯ - ೧
(ಹತ್ತು/ಹನ್ನೇರಡು ವರ್ಷದ ಹುಡುಗನೊಬ್ಬ ಕೈಯಲ್ಲಿ ಸಣ್ಣ ಚಾಕುವೊಂದನ್ನು ಹಿಡಿದು ಸೇಬು ಹಣ್ಣೊಂದನ್ನು ಕೊಯುತ್ತಿದ್ದಾನೆ. ಅಕಸ್ಮಾತ್ ಎಂಬಂತೆ ಚಾಕು ಅವನ ತೋರು ಬೆರಳಿಗೆ ತಾಗಿದಂತಾಗಿ ರಕ್ತ ಸುರಿಯಲಾರಂಭಿಸುತ್ತದೆ.)
ಶರಣು :- “ಅಯ್ಯೋ….ss…ಅಮ್ಮಾ….ಊಂ…ಊಂ….ಊಂ….!”
(ಜೋರಾಗಿ ಅಳುತ್ತಾನೆ. ಹುಡುಗನ ತಾಯಿ ಅಡಿಗೆ ಮನೆಯಿಂದ ಹೊರ ಓಡಿ ಬರುತ್ತಾ….)
ಶಾಂತಮ್ಮ :- “ಶಾಣ್ಯಾ….. ಯಾಕೋ ಅಳ್ತಾ ಇದ್ದೀಯಾ ? ಏನಾಯ್ತೋ ?” (ಹುಡುಗನ ಕೈ ಮೇಲೆ ದೃಷ್ಟಿ ಬೀಳುತ್ತಲೆ…) “ಅಯ್ಯಿ, ನಿನ್ನ ಬಾಯಾಗ ಮಣ್ಣ ಹಾಕಾ, ಕೈಗ್ ಏನ್ ಮಾಡಿಕೊಂಡ್ಯೋ ? ರಗುತಾ ಬರ್ತಾ ಇದ್ಯೇಲ್ಲ.”
ಶರಣು :- “ನಾ….. ನಾ….. ಏನೂ ಮಾಡಿಲವ್ವಿ, ಈ ಚಾಕೂನೆ ನನ್ನ ಕೈ ಕತ್ತುರಿಸ್ಯಾದ….. ಊಂ….. ಊಂ….” (ಗಾಯವಾದ ಕೈಯನ್ನು ಜಾಡಿಸುತ್ತಾ ಹುಡುಗ ನುಡಿಯುತ್ತಾನೆ.)
ಶಾಂತಮ್ಮ :- “ಒಂದು ಗಳಗಿ ಸುಮ್ಮ ಕುಡಲ್ಲಂತಿಯಲ್ಲೋ ನೀ…. ನೋಡು ರಗುತ ಹ್ಯಾಂಗ್ ಸುರ್ಯಾಕತ್ತಾದ್. ನಿಂದರ್, ನಿಮ್ಮಪ್ಪಗ್ ಕರೀತೀನಿ. ದಾವಾಖಾನಿಗ್ ಹೋಗೊಣಂತ….. (ಹೊರಗಡೆ ನೋಡುತ್ತಾ) ಏನ್ರೀ, ಇಲ್ಲಿ ಬರ್ರ್ರೀ, ಇಂವಾ ಶಾಣ್ಯಾ ನೋಡ್ರಿ ಏನ್ ಮಾಡಿಕೊಂಡಾನ್”
(ತಂದೆಯ ಪ್ರವೇಶವಾಗುತ್ತೆ. ಮಗನ ಕೈಯನ್ನುನೋಡುತ್ತಲೆ…..)
ರಂಗಣ್ಣ :- “ಕತ್ತಿ ಇದ್ದಿ ಮನ್ಶಾ ಇದ್ದೇಯಲೆ ನೀ ? ಕುಳಾ ತಿಂದು ಮನ್ಯಾಗ್ ಸುಮ್ಮ ಇರಕ್ ಬರಂಗಿಲ್ಲೇನ್ ನಿಂಗ ?...... ನಡಿ ಮಗನಾ ದವಾಖಾನೀಗ್ ಈಗ್. ಅಲ್ಲಿ ಸೂಜಿ ಚುಚ್ಚತಾರ್ ಚುಚ್ಚಿಸ್ಕೊಮಕತ್ತಿ. ಅವಾಗ್ ನಿನಗ್ ಅರು ಬರ್ತಾದ್.”
(ತಂದೆ ಸಿಟ್ಟಿನಿಂದ ನುಡಿದು, ಮಗ ಮತ್ತು ಹೆಂಡತಿಯ ಜೊತೆ ಸ್ಟೇಜ್ ಕೆಳಗಿಳಿದು ಹೊರಬರುತ್ತಾನೆ.)
No comments:
Post a Comment